Friday, April 17, 2009

ಅಶೋಕ ಚಕ್ರವರ್ತಿ ಕಲಿಯುಗ ಇವುಗಳ ಅರಿವು ವೇದವ್ಯಾಸರಿಗೆ ಮೊದಲೇ ಅರಿವಿತ್ತು

ಇಂದು ಭಾಗವತದ ಹನ್ನೆರೆಡನೆ ಸ್ಕಂದ ಓದಿದೆ.ಶುಕ ಮಹರ್ಷಿಗಳು ಪರೀಕ್ಷಿತ ರಾಜನಿಗೆ ಕೃಷ್ಣನ ಇಹಲೋಕ ತ್ಯಾಗದ ನಂತರ ಏನಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ಹೇಳಿದ್ದಾರೆ.ಕಂಸನ ಮಾವ ಜರಾಸಂಧನ ವಂಶಜ ರಿಪುಂಜಯನ ನಂತರ ಅವನ ಮಂತ್ರಿ ಶುನಕನ ಪುತ್ರ ಪ್ರದ್ಯೋತ , ನಂತರ ಅವನ ಮಗ ಪಾಲಕ, ಹೀಗೆ ವಂಶ ವೃಕ್ಷ ಬೆಳೆದುಮಹಾನಂದಿಯ ಕಿರಿಯ ಹೆಂಡತಿಯ ಮಗ ನಂದ ಹಾಗು ಅವನ ಎಂಟು ಮಕ್ಕಳು ರಾಜ್ಯವನ್ನು ಆಳುತ್ತಾರೆ ಇವರ ವಧೆಯು ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯನ ಮ್ ಕಡೆಯಿಂದ ಆಗುತ್ತದೆ, ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಶೋಕವರ್ಧನನು ನಂತರ ಮಹಾರಾಜನಾಗುತ್ತಾನೆಜೊತೆಗೆ ಕಲಿಯುಗದ ಅಂತ್ಯವನ್ನೂ ಬರೆದಿದ್ದಾರೆಕಲಿಯುಗದಲ್ಲಿ ಜನರು ದೇವರನ್ನು ಧರ್ಮವನ್ನೂ ಪ್ರಶ್ನಿಸುತ್ತಾರೆ. ಹೊಟ್ಟೆ ಪಾಡೊಂದೇ ಧರ್ಮವೆನಿಸುತ್ತದೆ. ಜನರು ದುರ್ಗುಣಿಗಳಾಗಿಯೂ ವರ್ಣಗಳ ಅವಮಾನವನ್ನೂ ಮಾಡುತ್ತಾರೆ.ಆಗಾಗ ಚಂಡಮಾರುತ, ಭೂಕಂಪ ಇತ್ಯಾದಿಗಳು ಜರುಗುತ್ತಲಿರುತ್ತವೆಕಲಿಯುಗದ ಅಂತ್ಯ ಸೂರ್ಯ ಚಂದ್ರ ಹಾಗು ಗುರು ಈ ಮೂರು ಒಂದೇ ರಾಶಿಯಲ್ಲಿ ಜೊತೆಯಾಗಿ ಸೇರಿದ ದಿನವೇ ಆಗುತ್ತದೆ.ಇದೆಲ್ಲಾವನ್ನು ಸಾವಿರಾರು ವರ್ಷ್ಗಗಳ ಹಿಂದೆಯೇ ವೇದ ವ್ಯಾಸರು ವೀಕ್ಷಿಸಿದ್ದಾರೆ.ಎಷ್ಟು ಸತ್ಯಗಳನ್ನು ನುಡಿದಿದ್ದಾರೆ.ಸುಮ್ಮನೆ ತಮ್ಮಗಳ ಆವಾಹನೆಗಷ್ಟೆ

2 comments: